ಮಾರುಕಟ್ಟೆಯ ಏರುಪೇರುಗಳ ನಡುವೆ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಮುಂದುವರಿಸಲು ಕಷ್ಟವಾಗುತ್ತಿದೆಯೇ? ನೀವು ಒಬ್ಬರಲ್ಲ. ದೀರ್ಘಕಾಲ ಹೂಡಿಕೆ ಮಾಡುವುದು ಏಕೆ ಕಷ್ಟವಾಗುತ್ತದೆ ಎಂಬ ಐದು ಮನೋವೈಜ್ಞಾನಿಕ ಕಾರಣಗಳನ್ನು ಮತ್ತು ಅದನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
“ನಾನು ಹೂಡಿಕೆ ಮುಂದುವರಿಸಬೇಕೇ?”
“ಲಾಭ ಸರಿಯಾಗಿ ಬರುತ್ತಿಲ್ಲ… ಬೇರೆಡೆಗೆ ಬದಲಾಯಿಸಬೇಕೇ?”
“ಹಿಂದೆ 5-ಸ್ಟಾರ್ ಇದ್ದ ಫಂಡ್ ಈಗ ಹಾಗಿಲ್ಲ… ಮಾರಿಬಿಡಬೇಕೇ?”
“ಈ ಫಂಡ್ನಲ್ಲಿ ಹೂಡಿಕೆ ಮಾಡಿದ್ದು ತಪ್ಪಾಯಿತೇ?”
“ಮಾರುಕಟ್ಟೆ ಇನ್ನೂ ಇಳಿಯುತ್ತದೆಯೇ?”
“SIP ನಿಲ್ಲಿಸಬೇಕೇ?”
ಈ ರೀತಿಯ ಪ್ರಶ್ನೆಗಳು ನನ್ನ ಬಹುತೇಕ ಗ್ರಾಹಕರಿಂದ ಕೇಳುತ್ತೇನೆ. ಮಾತು ಬದಲಾಗುತ್ತದೆ, ಆದರೆ ಪ್ರಶ್ನೆ ಒಂದೇ.
ಇನ್ನೊಂದು ಪರಿಸ್ಥಿತಿಯನ್ನು ನೆನಪಿಸಿಕೊಳ್ಳಿ.
ಒಳ್ಳೆಯ ಹೂಡಿಕೆಯನ್ನು ಮಾಡಿದ್ದರೂ, ಬೇಗನೆ ಮಾರಿಬಿಟ್ಟು ನಂತರ ಪಶ್ಚಾತ್ತಾಪ ಪಟ್ಟವರು ನಮಗೆ ಗೊತ್ತಿರುತ್ತಾರೆ ಅಥವಾ, ಒಂದು ಹೂಡಿಕೆಯಿಂದ ಇನ್ನೊಂದಕ್ಕೆ ಜಿಗಿದು ಕೊನೆಗೆ ಕಡಿಮೆ ಲಾಭ ಕಂಡವರು. ದೀರ್ಘಕಾಲ ಹೂಡಿಕೆ ಮಾಡುವುದು ಅನೇಕರಿಗೆ ಕಷ್ಟ.
ಈ ವಿಷಯವನ್ನು ನಾನು ಗಮನಿಸಿ, ಸ್ವಲ್ಪ ಅಧ್ಯಯನ ಮಾಡಿದ್ದೇನೆ. ಅದರಲ್ಲಿ ತಿಳಿದ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
1. ಸ್ಪಷ್ಟ ಯೋಜನೆಯ ಕೊರತೆ
ಹೆಚ್ಚಿನವರು ಹಳೆಯ ಲಾಭದ ಆಧಾರದ ಮೇಲೆ ಹೂಡಿಕೆ ಆಯ್ಕೆ ಮಾಡುತ್ತಾರೆ. ಸರಿಯಾದ ಯೋಜನೆ ಇರೋದಿಲ್ಲ. ಅದರಿಂದ ಏನಾದರೂ ತಪ್ಪಾದಾಗ ಗಾಬರಿ ಶುರುವಾಗುತ್ತದೆ.
ಹಾಗೆ ಆಗದ ಹಾಗೆ ಏನು ಮಾಡಬೇಕು? ಸರಳವಾದ, ಬರಹದಲ್ಲಿ ಹೂಡಿಕೆ ಯೋಜನೆ ಮಾಡಿ. ನಿಮ್ಮ ಗುರಿ, ಅವಧಿ ಮತ್ತು ಅಪಾಯ ಸಹಿಸುವ ಸಾಮರ್ಥ್ಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ.
ಗುರಿಗಳನ್ನು ಹೀಗೆ ವಿಭಜಿಸಿ:
ಕಿರು ಅವಧಿ — ತುರ್ತು ನಿಧಿ, ಪ್ರವಾಸ, ಚಿಕ್ಕ ಖರ್ಚುಗಳು
ಮಧ್ಯಮ ಅವಧಿ — ಮನೆ, ನಿಮ್ಮ ಉನ್ನತ ಶಿಕ್ಷಣ
ದೀರ್ಘಾವಧಿ — ನಿವೃತ್ತಿ, ಮಕ್ಕಳ ಭವಿಷ್ಯ
ಆಮೇಲೆ ಹೂಡಿಕೆಗಳನ್ನು ಅದಕ್ಕೆ ಅನುಗುಣವಾಗಿ ಹೊಂದಿಸಿ.
2. ನಮಗೆ ಖಚಿತತೆ ಗೆ ಇರುವ ಪ್ರೀತಿ
ನಮ್ಮ ಮೆದುಳು ಅನಿಶ್ಚಿತತೆಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ 5% ಖಚಿತ ಲಾಭ ಇರುವ ಠೇವಣಿ, 12% ಸಾಧ್ಯತೆಯ ಹೂಡಿಕೆಗೆ ಹೋಲಿಸಿದರೆ ಹೆಚ್ಚು ಸುರಕ್ಷಿತವಾಗಿ ಅನಿಸುತ್ತದೆ.
ಆದರೆ ಈ ಭದ್ರತೆ ಭಾವನೆ ದೀರ್ಘಕಾಲದ ಬೆಳವಣಿಗೆಯನ್ನು ಕಡಿಮೆ ಮಾಡಬಹುದು.
ಏನು ಮಾಡಬೇಕು? ಚಿಕ್ಕ ಮೊತ್ತದಿಂದ ಪ್ರಾರಂಭಿಸಿ. ಬೇಗ ಪ್ರಾರಂಭಿಸಿ. ವಿವಿಧ ರೀತಿಯ ಹೂಡಿಕೆಗಳನ್ನು ಸೇರಿಸಿ. ನಿಧಾನವಾಗಿ ಮಾರುಕಟ್ಟೆ ಬಗ್ಗೆ ವಿಶ್ವಾಸ ಬರುತ್ತದೆ.
3. ಭಾವನೆಗಳ ಏರುಪೇರು
ನಮ್ಮ ಹಣದೊಡನೆ ಇರುವ ಸಂಬಂಧ ತುಂಬ ಭಾವನಾತ್ಮಕವಾದುದು. ಮಾರುಕಟ್ಟೆ ಏರಿದಾಗ, ನಾವು ನಮಗೆ ಬಹಳ ಬುದ್ಧಿವಂತರೆಂದು ಅನಿಸುತ್ತದೆ. ಮಾರುಕಟ್ಟೆ ಇಳಿದಾಗ, ನಾವು ಬಲಿಯಾಗಿರುವಂತೆ ಅನಿಸುತ್ತದೆ. ನಷ್ಟದ ಭಯ ಹೆಚ್ಚು. ಅದರ ಕಾರಣದಿಂದ ಅನೇಕರು ತಪ್ಪಾದ ಸಮಯದಲ್ಲಿ ಮಾರಿಬಿಡುತ್ತಾರೆ.
ಏನು ಮಾಡಬೇಕು? ಮಾರುಕಟ್ಟೆಯ ಏರುಪೇರುಗಳು ಸಹಜ. ಹವಾಮಾನದಂತೆ ಬರುವುದು ಹೋಗುವುದು. ಆದ್ದರಿಂದ ತಾಳ್ಮೆಯಿಂದ ಇರುವುದು ತುಂಬ ಮುಖ್ಯ.
4. ಸುದ್ದಿ, ಗದ್ದಲ ಮತ್ತು FOMO
ಇಂದು ಎಲ್ಲೆಡೆ ಮಾಹಿತಿ ಸಿಗುತ್ತದೆ. ಇಂದು ಒಂದು ಟ್ರೆಂಡ್, ನಾಳೆ ಇನ್ನೊಂದು. ಏನಾದರೂ ಮಾಡಬೇಕು ಅನ್ನಿಸುವುದು ಸಹಜ.
ಏನು ಮಾಡಬೇಕು? ಗದ್ದಲದಿಂದ ದೂರವಿರಿ. ನಿಮ್ಮ portfolio ವನ್ನು ಪ್ರತಿ ದಿನ ನೋಡುವ ಬದಲು, ಕೆಲ ತಿಂಗಳಿಗೆ ಒಮ್ಮೆ ಪರಿಶೀಲಿಸಿ. ಸುದ್ದಿಗಳು ನಿಮ್ಮ ನಿರ್ಧಾರಗಳನ್ನು ನಿಯಂತ್ರಿಸದಂತೆ ನೋಡಿಕೊಳ್ಳಿ.
5. ತಕ್ಷಣದ ಫಲಿತಾಂಶದ ನಿರೀಕ್ಷೆ
ಇಂದು ಎಲ್ಲವೂ ತಕ್ಷಣ ಸಿಗುತ್ತದೆ. ಆದ್ದರಿಂದ ಹೂಡಿಕೆಯಲ್ಲೂ ಅದೇ ನಿರೀಕ್ಷೆ. ಆದರೆ ಹೂಡಿಕೆ ಬೇರೆ. ಲಾಭ ಸಮಯ ತೆಗೆದುಕೊಳ್ಳುತ್ತದೆ.
ಏನು ಮಾಡಬೇಕು? ತಾಳ್ಮೆ ಇರಲಿ, ನಿಮ್ಮ ಗುರಿಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ಗುರಿ ಸ್ಪಷ್ಟವಾದರೆ, ತಾಳ್ಮೆ ಹೆಚ್ಚುತ್ತದೆ.
ಸಹಾಯ ಬೇಕಾದರೆ ಪಡೆಯಿರಿ
ಹಣಕಾಸು ವಿಷಯದಲ್ಲಿ ಸಹಾಯ ಕೇಳುವುದು ಸಹಜ. ಒಬ್ಬ ಸಲಹೆಗಾರ ನಿಮಗೆ ಗುರಿಗಳನ್ನು ಸ್ಪಷ್ಟಪಡಿಸಲು, ಸರಿಯಾದ ಹೂಡಿಕೆ ಆಯ್ಕೆ ಮಾಡಲು, ಕಠಿಣ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಬಹುದು.
ಕೊನೆಯ ಮಾತು
ಹೂಡಿಕೆಯಲ್ಲಿ ಮುಂದುವರಿಯುವುದು ಸುಲಭವಲ್ಲ. ಆದರೆ ಸರಿಯಾದ ಮನೋಭಾವ, ಯೋಜನೆ ಮತ್ತು ಮಾರ್ಗದರ್ಶನ ಇದ್ದರೆ ಅದು ಸಾಧ್ಯ. ದೀರ್ಘಕಾಲ ಹೂಡಿಕೆ ಮಾಡಿದರೆ ಫಲಿತಾಂಶ ಜೀವನ ಬದಲಾಯಿಸುವಂತಿರುತ್ತದೆ. ಹೂಡಿಕೆ ಮುಂದುವರಿಸಿ.
ನಿಷ್ಠೆಯಿಂದ ಇರಿ. ಸಮಯ ತನ್ನ ಕೆಲಸ ಮಾಡಲಿ.

Shreedhara is the Founder & Director of Ara Financial Services Pvt. Ltd. He has an experience of over 2 decades in Financial Service Industry with majority of it in guiding individuals and institutions on their investments requirements.



