ಪ್ರತಿ ಪರಿಸ್ಥಿತಿಯೂ ವಿಭಿನ್ನವಾಗಿ ಕಾಣುತ್ತದೆ, ಆದರೆ  ಮಾರುಕಟ್ಟೆಯ ಕಥೆ ಒಂದೇ ಆಗಿರುತ್ತದೆ 

ಯುದ್ಧಗಳು, ಹಣಕಾಸಿನ ದುಸ್ಥಿತಿ,  ಮಹಾಮಾರಿಗಳು ಮತ್ತು ನೀತಿ  ಬದಲಾವಣೆಗಳನ್ನೂ ಮಾರುಕಟ್ಟೆಗಳು ಎದುರಿಸಿವೆ. ಆದರೂ ದೀರ್ಘಕಾಲಿಕ ಲಾಭಗಳು ಸ್ಥಿರವಾಗಿಯೇ ಉಳಿದಿವೆ. 

ಯುದ್ಧಗಳು, ಹಣಕಾಸಿನ ದುಸ್ಥಿತಿ, ಮಹಾಮಾರಿಗಳು ಮತ್ತು ನೀತಿ ಬದಲಾವಣೆಗಳನ್ನೂ ಮಾರುಕಟ್ಟೆಗಳು ಎದುರಿಸಿವೆ. ಆದರೂ ದೀರ್ಘಕಾಲಿಕ ಲಾಭಗಳು ಸ್ಥಿರವಾಗಿಯೇ  ಉಳಿದಿವೆ. ಸಹನೆಯುಳ್ಳ ಹೂಡಿಕೆದಾರರು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ. 

ಕಳೆದ ಮೂರು ದಶಕಗಳನ್ನು ಹಿಂದಿರುಗಿ ನೋಡಿದಾಗ, ಭಾರತೀಯ ಆರ್ಥಿಕತೆ ಯು ಅನೇಕ ಆಘಾತಗಳನ್ನು ಎದುರಿಸಿದೆ. ಅವು ಪ್ರತಿಯೊಂದು ಸಂದರ್ಭದಲ್ಲೂ ಆತಂಕ,  ಭಯ ಮತ್ತು ಅನಿಶ್ಚಿತತೆಯನ್ನು ಉಂಟುಮಾಡುವಷ್ಟು ಗಂಭೀರವಾಗಿದ್ದವು. ಅನೇಕ ದೀರ್ಘಕಾಲಿಕ ಹೂಡಿಕೆದಾರರು ತಮ್ಮ ಹಣಕಾಸಿನ ಗುರಿಗಳನ್ನು ಸಹ  ಮರೆತುಬಿಟ್ಟಿದ್ದರು. ಪ್ರಮುಖ ಘಟನೆಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ: 

  • ಪಾವತಿ ಸಮತೋಲನ ಸಂಕಷ್ಟ (1991) 
  • ಏಷ್ಯನ್ ಹಣಕಾಸಿನ ಸಂಕಷ್ಟ (1997–1998) 
  • ಪೋಖ್ರಾನ್ ಅಣು ಪರೀಕ್ಷೆಗಳ ನಂತರದ ನಿರ್ಬಂಧಗಳು (1998) 
  • ಕಾರ್ಗಿಲ್ ಯುದ್ಧ (1999) 
  • ಡಾಟ್-ಕಾಮ್ ಬಬಲ್ ಸ್ಫೋಟ (2000–2001) 
  • ಜಾಗತಿಕ ಹಣಕಾಸಿನ ಸಂಕಷ್ಟ (2008–2009) 
  • ಭಾರತವನ್ನು “Fragile Five” ಪಟ್ಟಿಗೆ ಸೇರಿಸಿದಾಗ ಆದ ಟೇಪರ್ ಟ್ಯಾಂಟ್ರಮ್ ಮತ್ತು CAD/ವಿದೇಶಿ ವಿನಿಮಯ ಆತಂಕ (2011–2013) 
  • ಟ್ವಿನ್ ಬ್ಯಾಲೆನ್ಸ್ ಶೀಟ್ ಮತ್ತು NPA ಸಂಕಷ್ಟ (2014–2018) 
  • ನೋಟುಬದಲಾವಣೆ (2016) 
  • GST ಜಾರಿಗೆ (2017) 
  • IL&FS ಡೀಫಾಲ್ಟ್ ಮತ್ತು NBFC ಲಿಕ್ವಿಡಿಟಿ ಸಂಕಷ್ಟ (2018–2019) 
  • COVID-19 ಮಹಾಮಾರಿ (2020) 
  • ಉಕ್ರೇನ್ ಯುದ್ಧದ  ಪರಿಣಾಮ (2022–ಮುಂದುವರಿಯುತ್ತಿದೆ) 
  • ಇಸ್ರೇಲ್ ಸಂಘರ್ಷ ಮತ್ತು middle east ಉದ್ವಿಗ್ನತೆ (2023–ಮುಂದುವರಿಯುತ್ತಿದೆ) 

ಈ ಲೇಖನ ಬರೆಯುತ್ತಿರುವಾಗಲೇ ಚೀನಾ ತೈವಾನ್ ಸುತ್ತ ನೌಕಾಪಡೆಯ ಚಟುವಟಿಕೆ, ಅಮೆರಿಕಾದ ವೆನೆಜುಲಾ ದಾಳಿ, ಇರಾನ್ ಅಶಾಂತಿ ಮುಂತಾದ ಸುದ್ದಿಗಳನ್ನೂ  ಕೇಳುತ್ತಿದ್ದೇವೆ. ನಿಜ ಹೇಳಬೇಕಾದರೆ, ಈ ಪಟ್ಟಿ ಎಂದಿಗೂ ಪೂರ್ಣವಾಗುವುದಿಲ್ಲ. 

ಹಣಕಾಸಿನ ಕ್ಷೇತ್ರದಲ್ಲಿ ವರ್ಷಗಳ ಅನುಭವದ ನಂತರ ನನಗೆ ಸ್ಪಷ್ಟವಾದ ಒಂದು ಸಂಗತಿ ಏನೆಂದರೆ -ಆರ್ಥಿಕ ಚಕ್ರಗಳು, ಜಾಗತಿಕ ಸಂಘರ್ಷಗಳು, ನೀತಿ ಬದಲಾವಣೆಗಳು  ಮತ್ತು ಹಣಕಾಸಿನ ವ್ಯತ್ಯಯಗಳು ಹೂಡಿಕೆ ಪ್ರಪಂಚದ ಶಾಶ್ವತ ಅಂಶಗಳು.  

ಹೂಡಿಕೆದಾರರು ನೀಡುವ ಪ್ರತಿಕ್ರಿಯೆ ಕಾಲಕ್ರಮೇಣ ಬದಲಾಗುತ್ತದೆಯೇ ಹೊರತು ಇಂಥ ಸಂದರ್ಭಗಳು ಸರ್ವೇ ಸಾಮಾನ್ಯ 

image 3

 ಎಲ್ಲ ಅಶಾಂತಿಗಳ ನಡುವೆಯೂ ದೀರ್ಘಕಾಲಿಕ ಹೂಡಿಕೆ ಏನು ನೀಡಿದೆ?* 

  • ನಿಫ್ಟಿ 50 ಕಳೆದ 20, 15 ಮತ್ತು 10 ವರ್ಷಗಳಲ್ಲಿ ಕ್ರಮವಾಗಿ 11.61%, 10.61% ಮತ್ತು 13.19% ವಾರ್ಷಿಕೀಕೃತ ಲಾಭ ನೀಡಿದೆ. 
  • ನಿಫ್ಟಿ 200 ಕಳೆದ 20, 15 ಮತ್ತು 10 ವರ್ಷಗಳಲ್ಲಿ ಕ್ರಮವಾಗಿ 11.69%, 11.22% ಮತ್ತು 13.83% ಲಾಭ ನೀಡಿದೆ. 
  • ನಿಫ್ಟಿ 500 ಕಳೆದ 20, 15 ಮತ್ತು 10 ವರ್ಷಗಳಲ್ಲಿ ಕ್ರಮವಾಗಿ 11.84%, 11.53% ಮತ್ತು 14.13% ಲಾಭ ನೀಡಿದೆ. 

ಮಾರುಕಟ್ಟೆಗಳು ಸದಾ ಸಹನೆ, ಶಿಸ್ತು ಮತ್ತು ದೀರ್ಘಕಾಲಿಕ ನಂಬಿಕೆಯನ್ನು ಬಹುಮಾನಿಸುತ್ತವೆ ಎಂದು ಈ ಮಾಹಿತಿಯು ಸ್ಪಷ್ಟವಾಗಿ ಏನು ಹೇಳುತ್ತದೆ 

ಮೇಲೆ ಉಲ್ಲೇಖಿಸಿದ ಪ್ರತಿಯೊಂದು ಸಂಕಷ್ಟವೂ ತನ್ನ ಸಮಯದಲ್ಲಿ “ಜಗತ್ತಿನ ಅಂತ್ಯ” ಎಂಬಂತೆ ಭಾಸವಾಗಿತ್ತು. ಸುದ್ದಿಶೀರ್ಷಿಕೆಗಳು ಭೀತಿಜನಕವಾಗಿದ್ದವು.  ಮನೋಭಾವ ದುರ್ಬಲವಾಗಿತ್ತು. ಮಾರುಕಟ್ಟೆಗಳು ಮತ್ತೆ ಏಳುತ್ತವೆಯೇ ಎಂಬ ಪ್ರಶ್ನೆ ಹೂಡಿಕೆದಾರರನ್ನು ಕಾಡುತ್ತಿತ್ತು. 

ಹೂಡಿಕೆಯನ್ನು ಮುಂದುವರಿಸಿದವರಿ ಗೆ ಪ್ರತಿಯೊಂದು ಸಂಕಷ್ಟವೂ ದೀರ್ಘ ಏರಿಗೆಯ ಪಯಣದಲ್ಲಿ ಒಂದು ಸಣ್ಣ ಕುಸಿತವಾಗಿ ಮಾತ್ರ ಉಳಿಯಿತು. 

ಮಾರುಕಟ್ಟೆಗಳು ಊಹಿಸದ ಘಟನೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತವೆ. ಆದರೆ ದೊಡ್ಡ ಚಿತ್ರವನ್ನು ನೋಡಿದಾಗ, ಈ ತೀವ್ರ ಕುಸಿತಗಳು ಅಷ್ಟು ಭಯಾನಕವಾಗಿ  ಕಾಣುವುದಿಲ್ಲ.ಶಾಶ್ವತ ಹಾನಿಯಂತೆ ಕಂಡದ್ದು, ದೀರ್ಘಕಾಲಿಕ ಬೆಳವಣಿಗೆಯ ಕಥೆಯಲ್ಲಿ ತಾತ್ಕಾಲಿಕ ಶಬ್ದವಾಗಿಬಿಡುತ್ತದೆ. 

ಹೂಡಿಕೆಯಲ್ಲಿ ನಿರಂತರತೆ, ನಿಯಮಿತ ಹೂಡಿಕೆ (SIP) ಮತ್ತು ಚಕ್ರಬಡ್ಡಿಗೆ ಸಮಯ ನೀಡುವುದು ಇತಿಹಾಸದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿದೆ.   

ಅನಿಶ್ಚಿತತೆಯ ನಡುವೆ ಹೂಡಿಕೆಯಲ್ಲಿ ಉಳಿಯುವುದು ಚಕ್ರಬಡ್ಡಿಗೆ ಅಗತ್ಯವಾದ ಸಮಯವನ್ನು ನೀಡುತ್ತದೆ. 

ಪ್ರಪಂಚವು ಆಗಿಂದಾಳಗೆ  ಅನಿಶ್ಚಿತವಾಗಿಯೇ ಕಾಣುತ್ತದೆ. ಅದು ಅನಿವಾರ್ಯ. ಆದರೆ ದೀರ್ಘಕಾಲಿಕ ಹೂಡಿಕೆ ಪುನಃಪುನಃ ತನ್ನ ಸ್ಥೈರ್ಯವನ್ನು ಸಾಬೀತುಪಡಿಸಿದೆ. 

ಇಂತಹ ಘಟನೆಗಳು ಹೆಚ್ಚಿನ ಹೂಡಿಕೆ ಮಾಡಲು ಅವಕಾಶಗಳಾಗಬಹುದು ಎಂಬುದನ್ನು ಹೂಡಿಕೆದಾರರು ಅರಿಯಬೇಕು. ಆದರೆ ಇಂತಹ ಸಂಕಷ್ಟಗಳಲ್ಲಿ ಹೆಚ್ಚುವರಿ  ಹೂಡಿಕೆ ಮಾಡಲು ಆಗದಿದ್ದರೂ, “ಏನೂ ಮಾಡದೇ ಇರುವುದೂ” ನಿಮ್ಮ ಹಣಕಾಸಿನ ಸ್ವಾತಂತ್ರ್ಯದ ಪರವಾಗಿ ಕೆಲಸ ಮಾಡಬಹುದು. 

ಮಾರುಕಟ್ಟೆಯ ಅಸ್ಥಿರತೆ ಶತ್ರುವಲ್ಲ; ಅದು ಸಹನೆಯುಳ್ಳ ಹೂಡಿಕೆದಾರರಿಗೆ ಕಾಲಕ್ರಮೇಣ ಅರ್ಥಪೂರ್ಣ ಸಂಪತ್ತನ್ನು ನಿರ್ಮಿಸಲು ಸಹಾಯ ಮಾಡುವ ಮಿತ್ರ ನೆಂದು  ಹಲವು ಭಾರಿ ಸಾಬೀತು ಪಡಿಸಿದೆ. 

Leave a Comment

Your email address will not be published. Required fields are marked *

ಉಯಿಲು (Will): ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು ಇಲ್ಲಿದೆ.

ಉಯಿಲು (Will): ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು ಇಲ್ಲಿದೆ. 

ಕಳೆದ ಐದು ವರ್ಷಗಳಲ್ಲಿ, ಜನರು Willನ ಬಗ್ಗೆ ಯೋಚಿಸುವ ರೀತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ನಾನು ಕಂಡಿದ್ದೇನೆ.  ಹಿಂದೆ, ಗ್ರಾಹಕರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಅವರ ಪ್ರತಿಕ್ರಿಯೆ ಹೇಗಿರಬಹುದು ಎಂಬುದನ್ನು ನಾನು ಬಹುತೇಕ ಊಹಿಸಬಹುದಾಗಿತ್ತು. ಕೆಲವರು ತಕ್ಷಣವೇ ವಿಷಯವನ್ನು ಬದಲಾಯಿಸುತ್ತಿದ್ದರು, ಇನ್ನೂ ಕೆಲವರು, “ಇದರ ಬಗ್ಗೆ ನಂತರ ಮಾತನಾಡೋಣ” ಎಂದು ವಿನಯದಿಂದ ಹೇಳುತ್ತಿದ್ದರು. ಹಲವರು Will ಎನ್ನುವುದು ವೃದ್ಧಾಪ್ಯದಲ್ಲಿ ಮಾಡುವ ವಿಷಯ ಎಂದು ಭಾವಿಸುತ್ತಿದ್ದರು. ಕೆಲವರಿಗೆ willನ ಬಗ್ಗೆ ಮಾತನಾಡುವುದೇ ಅಶುಭ ಅಥವಾ ದುರಾದೃಷ್ಟವನ್ನು ಆಹ್ವಾನಿಸುವಂತದ್ದು ಎಂಬ ನಂಬಿಕೆಯೂ ಇತ್ತು.  ಕೊರೊನಾ ಒಂದು ಮಹತ್ವದ ತಿರುವಾಗಿ ಪರಿಣಮಿಸಿದೆ. ಜೀವನ ಅನಿಶ್ಚಿತವಾದರೂ, ನಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಯೋಜಿಸುವುದು ನಮ್ಮ ಕೈಯಲ್ಲೇ ಇದೆ ಎಂಬುದನ್ನು ಅದು ನಮ್ಮಲ್ಲಿ ಅನೇಕರಿಗೆ ನೆನಪಿಸಿತು. ಮುಂಚಿತವಾಗಿ ಯೋಜಿಸುವುದು ನಮ್ಮ ಕುಟುಂಬಕ್ಕಾಗಿ ನಾವು ನೆರವೇರಿಸಬಹುದಾದ ಅತ್ಯಂತ ದೊಡ್ಡ ಜವಾಬ್ದಾರಿಗಳಲ್ಲಿ ಒಂದಾಗಿದೆ. ಮಹಾಮಾರಿಯ ನಂತರ ಈ ಸತ್ಯವನ್ನು ಅರಿತುಕೊಂಡ ಕಾರಣ, ಜನರು ಈಗ will ಮತ್ತು Estate Planningಬಗ್ಗೆ ಹೆಚ್ಚು ಮುಕ್ತವಾಗಿ ಚರ್ಚಿಸಲು ಆರಂಭಿಸಿದ್ದಾರೆ.  ನನ್ನ ಅಭಿಪ್ರಾಯದಲ್ಲಿ, ನಿಮ್ಮ ಆಸ್ತಿಯ ಪ್ರಮಾಣ ಎಷ್ಟೇ ಇರಲಿ, ಪ್ರತಿಯೊಂದು ಹಣಕಾಸು ಯೋಜನೆ (Financial Planning) ಕುರಿತ ಸಂಭಾಷಣೆಯ ಭಾಗವಾಗಿ Willನ ಬಗ್ಗೆ ಚರ್ಚೆಯಾಗಬೇಕು. ನೀವು ಮನೆ ಹೊಂದಿರಲಿ, ಹೂಡಿಕೆಗಳನ್ನು ಮಾಡಿರಲಿ, ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿರಲಿ ಅಥವಾ ಈಗಷ್ಟೇ ಸಂಪತ್ತನ್ನು ನಿರ್ಮಿಸಲು ಆರಂಭಿಸಿರಲಿ, Will ಎಲ್ಲರಿಗೂ ಪ್ರಸ್ತುತವಾಗಿದೆ.  ಆರಂಭಿಸುವ ಮೊದಲು, ಒಂದು ಸಾಮಾನ್ಯ ಗೊಂದಲವನ್ನು ನಿವಾರಿಸೋಣ  Will, Estate Planning, ಮತ್ತು Succession Planning ಎಂಬ ಪದಗಳನ್ನು ಅನೇಕ ಬಾರಿ ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಅವೆಲ್ಲವೂ ಒಂದೇ ಅಲ್ಲ.  ಎಸ್ಟೇಟ್ ಪ್ಲಾನಿಂಗ್ (Estate Planning) ಎಂದರೆ, ನಿಮ್ಮ ಸಂಪತ್ತು, ಆಸ್ತಿಗಳು ಮತ್ತು ಹಣಕಾಸಿನ ವ್ಯವಹಾರಗಳನ್ನು ಹೇಗೆ ನಿರ್ವಹಿಸಬೇಕು ಹಾಗೂ ಅಂತಿಮವಾಗಿ ಯಾರಿಗೆ ಹೇಗೆ ವರ್ಗಾಯಿಸಬೇಕು ಎಂಬುದನ್ನು ನಿರ್ಧರಿಸುವ ವಿಶಾಲ ಪ್ರಕ್ರಿಯೆ.  ಉಯಿಲು (Will) ಎನ್ನುವುದು ಎಸ್ಟೇಟ್ ಪ್ಲಾನಿಂಗ್‌ನಲ್ಲಿನ ಅತ್ಯಂತ ಪ್ರಮುಖ ಸಾಧನಗಳಲ್ಲಿ ಒಂದಾಗಿದೆ. ಇದು ನಿಮ್ಮ ಇಚ್ಛೆಗಳನ್ನು ದಾಖಲಿಸುತ್ತದೆ ಮತ್ತು ನಿಮ್ಮ ಸಂಪತ್ತು ನೀವು ಬಯಸಿದ ರೀತಿಯಲ್ಲಿಯೇ ವರ್ಗಾವಣೆಯಾಗುವಂತೆ ಮಾಡಲು ಸಹಾಯ ಮಾಡುತ್ತದೆ.  ಇನ್ನೊಂದೆಡೆ, ಸಕ್ಸೆಷನ್ ಪ್ಲಾನಿಂಗ್ (Succession Planning) ಸಾಮಾನ್ಯವಾಗಿ ಒಂದು ವ್ಯವಹಾರದ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಮುಂದಿನ ತಲೆಮಾರಿಗೆ ಅಥವಾ ನೀವು ಆಯ್ಕೆ ಮಾಡಿದ ಉತ್ತರಾಧಿಕಾರಿಗಳಿಗೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದೆ.  ಬಹುತೇಕ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ, ಉಯಿಲನ್ನು ಬರೆಯುವುದು ಎಸ್ಟೇಟ್ ಪ್ಲಾನಿಂಗ್‌ನ ಮೊದಲ ಮತ್ತು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.  ಉಯಿಲಿನ ಬಗ್ಗೆ ಇರುವ ಕೆಲವು ಸಾಮಾನ್ಯ ತಪ್ಪು ಕಲ್ಪನೆಗಳನ್ನು ದೂರ ಮಾಡೋಣ  ವರ್ಷಗಳ ಅನುಭವದಲ್ಲಿ, ಕೆಲವು ತಪ್ಪು ಕಲ್ಪನೆಗಳನ್ನು ನಾನು ಮತ್ತೆ ಮತ್ತೆ ಕೇಳಿದ್ದೇನೆ.  “ನಾನು ಉಯಿಲು ಬರೆಯಲು ಇನ್ನೂ ತುಂಬಾ ಚಿಕ್ಕವನು / ಚಿಕ್ಕವಳು.”  ಉಯಿಲು ವಯಸ್ಸಿನ ಬಗ್ಗೆ ಅಲ್ಲ. ಅದು ಜವಾಬ್ದಾರಿಯ ಬಗ್ಗೆ. ನೀವು ಸಂಪಾದನೆ ಮಾಡಲು ಆರಂಭಿಸಿದ್ದರೆ, ಹೂಡಿಕೆಗಳನ್ನು ಹೊಂದಿದ್ದರೆ, ಆಸ್ತಿಗಳನ್ನು ಹೊಂದಿದ್ದರೆ ಅಥವಾ ನಿಮ್ಮ ಮೇಲೆ ಅವಲಂಬಿತರಾಗಿರುವವರು ಇದ್ದರೆ, ನೀವು ಉಯಿಲು ಬರೆಯುವುದನ್ನು ಪರಿಗಣಿಸಬಹುದು.  “ನನ್ನ ಬಳಿ ಅಷ್ಟು ದೊಡ್ಡ ಸಂಪತ್ತೇ ಇಲ್ಲ.”  ಉಯಿಲು ಕೇವಲ ಶ್ರೀಮಂತ ಕುಟುಂಬಗಳಿಗಷ್ಟೇ ಇರುವುದಲ್ಲ. ನಿಮ್ಮ ಬಳಿ ಏನೇ ಇದ್ದರೂ, ಅದು ಉಳಿತಾಯ ಖಾತೆಯಾಗಿರಲಿ, ಮ್ಯೂಚುವಲ್ ಫಂಡ್‌ಗಳಾಗಿರಲಿ, ವಿಮಾ ಪಾಲಿಸಿಗಳಾಗಿರಲಿ ಅಥವಾ ಒಂದು ಮನೆಯಾಗಿರಲಿ, ಅದು ನೀವು ಬಯಸುವ ವ್ಯಕ್ತಿಗಳ ಕೈಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದೇ ಉಯಿಲಿನ ಉದ್ದೇಶ.  “ನನ್ನ ಕುಟುಂಬದವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ.”  ಬಹುಶಃ ಅವರು ನೋಡಿಕೊಳ್ಳಬಹುದು. ಆದರೆ ಹೆಚ್ಚುವರಿ ಒತ್ತಡ, ದಾಖಲೆಗಳ ಕೆಲಸ, ವಿಳಂಬ ಮತ್ತು ಕೆಲವೊಮ್ಮೆ ಭಿನ್ನಾಭಿಪ್ರಾಯಗಳಿಲ್ಲದೆ ಅಲ್ಲ. ಒಂದು ಸರಳ ಉಯಿಲು ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಆದರೆ ಆ ಕಠಿಣ ಸಮಯದಲ್ಲಿ ನಿಮ್ಮ ಕುಟುಂಬವು ಅನಗತ್ಯ ಗೊಂದಲ, ದಾಖಲೆಗಳ ಕೆಲಸ ಮತ್ತು ಕಷ್ಟಕರ ನಿರ್ಧಾರಗಳಿಂದ ತಪ್ಪಿಸಿಕೊಳ್ಳಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ.  ಉಯಿಲು (Will) ಎಂದರೇನು?  ...
Read More →
Emergency fund

The Emergency Fund: The Brake That Lets You Accelerate

One of the biggest mistakes I see people make is focusing all their attention on returns, market opportunities, and wealth creation. They want to know ...
Read More →
Financial influencers

Why Investors Must Stop Confusing Popularity with Financial Expertise

A few days ago, I came across a report about India’s ongoing battle with unregistered online financial influencers. One phrase in the headline caught my ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp